ಹೊಸದಿಲ್ಲಿ: ಭಾರತ 'ಎ' ಹಾಗೂ ಅಂಡರ್ 19 ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿರುವ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ದೆಹಲಿ ಡೇರ್ಡೆವಿಲ್ಸ್ ಫ್ರಾಂಚೈಸಿಯ ಮಾರ್ಗದರ್ಶಕ ಹುದ್ದೆಯನ್ನು ನಿರ್ವಹಿಸುತ್ತಾರೆ.
ಸದ್ಯ ಮಾಡಿಕೊಂಡಿರುವ ಒಪ್ಪಂದದಂತೆ ದ್ರಾವಿಡ್ ವರ್ಷದಲ್ಲಿ 10 ತಿಂಗಳುಗಳ ಕಾಲ ಬಿಸಿಸಿಐ ಹಾಗೂ ಉಳಿದೆರಡು ತಿಂಗಳುಗಳ ಕಾಲ ಐಪಿಎಲ್ನಲ್ಲಿ ದೆಹಲಿ ಫ್ರಾಂಚೈಸಿಯ ಜೊತೆಗೆ ತಮ್ಮ ಹುದ್ದೆಯನ್ನು ನಿಭಾಯಿಸುತ್ತಾರೆ. ಆದರೆ ರಾಷ್ಟ್ರೀಯ ಸೇವೆಯಲ್ಲಿರುವ ದ್ರಾವಿಡ್ ಕ್ಲಬ್ ತಂಡದ ಜೊತೆಗೆ ಹೊಂದಾಣಿಕೆ ಮಾಡುವಂತಿಲ್ಲ.
ಇಂಗ್ಲಿಂಷ್ ದೈನಿಕ ವರದಿ ಮಾಡುವಂತೆಯೇ ಐಪಿಎಲ್ ಫ್ರಾಂಚೈಸಿ ಬಿಟ್ಟುಕೊಡಲು ದ್ರಾವಿಡ್ಗೆ ಯಾವುದೇ ಅಭ್ಯಂತರವಿಲ್ಲ. ಬದಲಾಗಿ ಐಪಿಎಲ್ನಲ್ಲಿ ಕೊಡಲಾಗುವ ಸಂಭಾವನೆಯನ್ನು ರಾಷ್ಟ್ರೀಯ ಸೇವೆಗಾಗಿ ನೀಡುವ ಮೂಲಕ ನಷ್ಟವನ್ನು ಸರಿದೂಗಿಸಲಾಗುವುದು.
ಬಲ್ಲ ಮೂಲಗಳ ಪ್ರಕಾರ ದ್ರಾವಿಡ್ ಗೆ ಸಮಾನವಾದ ಒಪ್ಪಂದದಲ್ಲಿರುವ ಟೀಮ್ ಇಂಡಿಯಾದ ಸಹಾಯಕ ಕೋಚ್ಗಳಾದ ಸಂಜಯ್ ಬಂಗಾರ್, ಆರ್ ಶ್ರೀಧರ್ ಮತ್ತು ಪ್ಯಾಟ್ರಿಕ್ ಫರ್ಹಾರ್ಟ್ ಅವರ ಜೊತೆಗೂ ನೂತನ ಒಪ್ಪಂದ ಮಾಡಿಕೊಳ್ಳಲಾಗುವುದು.
ಇವೆಲ್ಲವೂ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಹಿಸಾಸಕ್ತಿಯ ಘರ್ಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದ ವರೆಗೆ ಬಿಸಿಸಿಐ ಆಡಳಿತ ಸಮಿತಿಯು ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದೆ.
ಸದ್ಯ ಮಾಡಿಕೊಂಡಿರುವ ಒಪ್ಪಂದದಂತೆ ದ್ರಾವಿಡ್ ವರ್ಷದಲ್ಲಿ 10 ತಿಂಗಳುಗಳ ಕಾಲ ಬಿಸಿಸಿಐ ಹಾಗೂ ಉಳಿದೆರಡು ತಿಂಗಳುಗಳ ಕಾಲ ಐಪಿಎಲ್ನಲ್ಲಿ ದೆಹಲಿ ಫ್ರಾಂಚೈಸಿಯ ಜೊತೆಗೆ ತಮ್ಮ ಹುದ್ದೆಯನ್ನು ನಿಭಾಯಿಸುತ್ತಾರೆ. ಆದರೆ ರಾಷ್ಟ್ರೀಯ ಸೇವೆಯಲ್ಲಿರುವ ದ್ರಾವಿಡ್ ಕ್ಲಬ್ ತಂಡದ ಜೊತೆಗೆ ಹೊಂದಾಣಿಕೆ ಮಾಡುವಂತಿಲ್ಲ.
ಇಂಗ್ಲಿಂಷ್ ದೈನಿಕ ವರದಿ ಮಾಡುವಂತೆಯೇ ಐಪಿಎಲ್ ಫ್ರಾಂಚೈಸಿ ಬಿಟ್ಟುಕೊಡಲು ದ್ರಾವಿಡ್ಗೆ ಯಾವುದೇ ಅಭ್ಯಂತರವಿಲ್ಲ. ಬದಲಾಗಿ ಐಪಿಎಲ್ನಲ್ಲಿ ಕೊಡಲಾಗುವ ಸಂಭಾವನೆಯನ್ನು ರಾಷ್ಟ್ರೀಯ ಸೇವೆಗಾಗಿ ನೀಡುವ ಮೂಲಕ ನಷ್ಟವನ್ನು ಸರಿದೂಗಿಸಲಾಗುವುದು.
ಬಲ್ಲ ಮೂಲಗಳ ಪ್ರಕಾರ ದ್ರಾವಿಡ್ ಗೆ ಸಮಾನವಾದ ಒಪ್ಪಂದದಲ್ಲಿರುವ ಟೀಮ್ ಇಂಡಿಯಾದ ಸಹಾಯಕ ಕೋಚ್ಗಳಾದ ಸಂಜಯ್ ಬಂಗಾರ್, ಆರ್ ಶ್ರೀಧರ್ ಮತ್ತು ಪ್ಯಾಟ್ರಿಕ್ ಫರ್ಹಾರ್ಟ್ ಅವರ ಜೊತೆಗೂ ನೂತನ ಒಪ್ಪಂದ ಮಾಡಿಕೊಳ್ಳಲಾಗುವುದು.
ಇವೆಲ್ಲವೂ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಹಿಸಾಸಕ್ತಿಯ ಘರ್ಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದ ವರೆಗೆ ಬಿಸಿಸಿಐ ಆಡಳಿತ ಸಮಿತಿಯು ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದೆ.