Please enable javascript.Kesavananda Bharati Case,ಕೇಶವಾನಂದ ಭಾರತೀ vs ಕೇರಳ ಸರಕಾರ: ಸಂವಿಧಾನದ ಮೂಲ ಸ್ವರೂಪ ಉಳಿಸಿದ ಸಂತ - why kesavananda bharati vs state of kerala case is considered landmark in india's independent history - Vijay Karnataka

ಕೇಶವಾನಂದ ಭಾರತೀ vs ಕೇರಳ ಸರಕಾರ: ಸಂವಿಧಾನದ ಮೂಲ ಸ್ವರೂಪ ಉಳಿಸಿದ ಸಂತ

Vijaya Karnataka Web 7 Sep 2020, 12:00 pm
Subscribe

ಭಾರತೀಯ ನ್ಯಾಯಾಂಗ ಇತಿಹಾಸದಲ್ಲೇ 'ಕೇಶವಾನಂದ ಭಾರತೀ ವರ್ಸಸ್‌ ಕೇರಳ ಸರಕಾರ' ಪ್ರಕರಣ ಪ್ರಮುಖವಾದುದು. ಸಂವಿಧಾನದ ಮೂಲ ಸ್ವರೂಪ ಉಳಿಸಿದ ಪ್ರಕರಣ ಎಂದೇ ಕೊಂಡಾಡಲ್ಪಡುವ ಈ ಪ್ರಕರಣ, ತೀಪು ಇತ್ಯಾದಿಗಳ ಹಿನ್ನೆಲೆ ಮುನ್ನೆಲೆಗಳು ಇಲ್ಲಿವೆ.

why kesavananda bharati vs state of kerala case is considered landmark in indias independent history
ಕೇಶವಾನಂದ ಭಾರತೀ vs ಕೇರಳ ಸರಕಾರ: ಸಂವಿಧಾನದ ಮೂಲ ಸ್ವರೂಪ ಉಳಿಸಿದ ಸಂತ
ಭಾರತದ ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಸರಕಾರಗಳು 1950ರಿಂದಲೇ ಮಾಡುತ್ತಿವೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ತಮಗೆ ಬೇಕಾದಂತೆ ಸಂವಿಧಾನ, ಶಾಸಕಾಂಗ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಎಲ್ಲವನ್ನೂ ಬದಲಿಸಲು ಮುಂದಾದರು. ಹಾಗಾದರೆ ಸಂವಿಧಾನದಲ್ಲಿ ಎಲ್ಲವನ್ನೂ ತಿದ್ದುಪಡಿ ಮಾಡಬಹುದೇ? ಈ ಪ್ರಶ್ನೆ ಮೂಡಿತು. ಇದಕ್ಕೆ ಸ್ಪಷ್ಟ ಉತ್ತರವನ್ನು ನೀಡಿದ್ದು ಕೇಶವಾನಂದ ಭಾರತೀ ಪ್ರಕರಣ. 'ಸಂವಿಧಾನದ ಮೂಲ ಸ್ವರೂಪವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ' ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್‌ ಪೀಠ ನೀಡಿತು. ಇದೊಂದು ಐತಿಹಾಸಿಕ ಮಹತ್ವದ, ಭಾರತಕ್ಕಷ್ಟೇ ಅಲ್ಲ, ಜಾಗತಿಕವಾಗಿಯೂ ಪ್ರಮುಖವಾದ, ಎಲ್ಲಕಡೆಯೂ ಪದೇ ಪದೆ ಉಲ್ಲಖಿಸಲ್ಪಡುವ ಬೀಜಮಂತ್ರದಂತಹ ತೀರ್ಪು.

ದಾಖಲೆ ದಿನ, ದಾಖಲೆ ಪೀಠ: ಭಾರತದ ಇತಿಹಾಸದಲ್ಲಿ ಸಾಂವಿಧಾನಿಕ ಪೀಠವೊಂದು 13 ನ್ಯಾಯಾಧೀಶರನ್ನು ಹೊಂದಿ ರಚನೆಯಾದ ಪ್ರಕರಣ ಇದೇ ಮೊದಲು; ಇದೇ ಕೊನೆ. ದಾಖಲೆ 68 ದಿನಗಳ ಸುದೀರ್ಘ ನಿರಂತರ ವಿಚಾರಣೆ ನಡೆಸಿದ ಪ್ರಕರಣವೂ ಇದಾಗಿದೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎಂ.ಸಿಕ್ರಿ ಅವರ ನೇತೃತ್ವದ 13 ಜನರ ನ್ಯಾಯಪೀಠದಲ್ಲಿ ಕೇಶವಾನಂದ ಭಾರತೀ ಪರ 7:6ರ ತೀರ್ಪು ಬಂದಿತ್ತು. 1972ರ ಅಕ್ಟೋಬರ್‌ 31ರಿಂದ 1973ರ ಮಾರ್ಚ್ 23ರವರೆಗೆ ಇದರ ವಿಚಾರಣೆ ನಡೆಯಿತು.

ಏನೀ ಪ್ರಕರಣ?: 1972ರಲ್ಲಿ, ಕೇರಳ ಸರಕಾರ ಎರಡು ಭೂಸುಧಾರಣಾ ಕಾನೂನುಗಳನ್ನು ರೂಪಿಸಿತು. ಅದರಲ್ಲಿ, ಎಡನೀರು ಮಠದ ಜಮೀನಿನ ನಿರ್ವಹಣೆಯನ್ನು ಮಠದಿಂದ ಕಿತ್ತುಕೊಳ್ಳಲು ಸರಕಾರ ಮುಂದಾಗಿತ್ತು. ಇದನು ಪ್ರಶ್ನಿಸಿ ಕೇಶವಾನಂದ ಭಾರತೀ ಸ್ವಾಮೀಜಿ ಕೋರ್ಟಿಗೆ ಹೋದರು. ಇದರ ಜೊತೆಗೆ, ಇನ್ನೂ ಮೂರು ಸಂವಿಧಾನ ತಿದ್ದುಪಡಿಗಳನ್ನೂ ಸ್ವಾಮೀಜಿ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಅರ್ಜಿಯಲ್ಲಿ ಕೇಳಲಾಗಿದ್ದ ಮೂಲಭೂತ ಪ್ರಶ್ನೆ ಎಂದರೆ, ಸಂಸತ್ತು ಸಂವಿಧಾನವನ್ನು ತಿದ್ದುವ ಪರಮಾಧಿಕಾರವನ್ನು ಎಷ್ಟು ಹೊಂದಿದೆ, ಪ್ರಜೆಗಳ ಮೂಲಭೂತ ಹಕ್ಕುಗಳನ್ನೂ ಕಿತ್ತುಕೊಳ್ಳುವ ತಿದ್ದುಪಡಿಯನ್ನು ಸಂಸತ್ತು ಮಾಡಬಹುದೇ? ಆಸ್ತಿ ಹೊಂದುವ ಹಕ್ಕು ಕೂಡ ಭಾರತೀಯ ಪ್ರಜೆ ಹೊಂದಿರುವ ಹಕ್ಕುಗಳಲ್ಲಿ ಒಂದು.

ಹಿರಿಯ ವಕೀಲರ ದಂಡು

ಹಿರಿಯ ವಕೀಲರ ದಂಡು

ಭಾರತದ ಪ್ರಸಿದ್ಧ, ದೊಡ್ಡ ನ್ಯಾಯವಾದಿಗಳು ಕೇಶವಾನಂದ ಭಾರತೀ ಸ್ವಾಮೀಜಿಗಳ ಪರ ನಿಂತರು. ನಾನೀ ಪಾಲ್ಖೀವಾಲ, ಫಾಲಿ ನಾರಿಮನ್‌ ಮುಂತಾದವರು ಸಂವಿಧಾನಾತ್ಮಕ ಹಕ್ಕುಗಳನ್ನು ಸರಕಾರ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡುವಂತಿಲ್ಲಎಂದು ಪೀಠದ ಮುಂದೆ ಬಲವಾಗಿ ವಾದಿಸಿದರು. ಕೇಂದ್ರ ಸರಕಾರ ಕೂಡ ತನ್ನ ಪರವಾಗಿ ಎಚ್‌.ಎಂ.ಸೀರ್ವಾಯ್‌ ಹಾಗೂ ನಿರೇನ್‌ ಡೇಯಂಥ ಘಟಾನುಘಟಿ ವಕೀಲರನ್ನು ನೇಮಿಸಿತ್ತು.

ಕಾಸರಗೋಡು ಎಡನೀರು ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ ವಿಧಿವಶ!

ತಿದ್ದುಪಡಿಗಳ ಮಹಾಪೂರ: ಇಂಧಿರಾ ಗಾಂಧಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿಗಳ ಮೇಲೆ ತಿದ್ದುಪಡಿಗಳನ್ನು ತರುತ್ತಿತ್ತು. ಸುಮಾರು 41 ತಿದ್ದುಪಡಿಗಳನ್ನು ಇಂದಿರಾ ತಂದಿದ್ದರು. ಕೇಶವಾನಂದ ಭಾರತೀ ಸ್ವಾಮೀಜಿ ತಮ್ಮ ಅರ್ಜಿಯಲ್ಲಿಗೋಲಕ್‌ನಾಥ ಪ್ರಕರಣ ಹಾಗೂ ಇಂದಿರಾ ಸರಕಾರ ತಂದಿದ್ದ 24, 25, 26 ಹಾಗೂ 29ನೇ ತಿದ್ದುಪಡಿಗಳನ್ನು ಪ್ರಶ್ನಿಸಿದ್ದರು. ಗೋಲಕ್‌ನಾಥ ಪ್ರಕರಣದಲ್ಲಿಸರಕಾರ ವ್ಯಕ್ತಿಯ ಆಸ್ತಿ ಹಕ್ಕನ್ನು ಕಿತ್ತುಕೊಳ್ಳುವಂತಿಲ್ಲಎಂದಿದ್ದರಿಂದ ಕೆರಳಿದ್ದ ಇಂದಿರಾ, 1971ರಲ್ಲಿಸಂವಿಧಾನಕ್ಕೆ 24ನೇ ತಿದ್ದುಪಡಿ ತಂದು, ಪ್ರಜೆಗಳ ಮೂಲಭೂತ ಹಕ್ಕುಗಳನ್ನೂ ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗಿದೆ ಎಂದು ಸ್ಥಾಪಿಸಿದರು. 1972ರಲ್ಲಿಆಸ್ತಿ ಹಕ್ಕಿಗೆ ತಿದ್ದುಪಡಿ ತರುವ 25ನೇ ತಿದ್ದುಪಡಿಯನ್ನೂ ಮಾಡಿಸಿದರು. ಅದೇ ಸಮಯದಲ್ಲಿ14 ಖಾಸಗಿ ಬ್ಯಾಂಕ್‌ಗಳನ್ನು ಸರಕಾರ ರಾಷ್ಟ್ರೀಕರಣ ಮಾಡಿತು. ಆದರೆ ಅದರ ಮಾಲಿಕರಿಗೆ ಸರಿಯಾದ ಪರಿಹಾರಧನ ಕೊಡಲಿಲ್ಲ. ಇದನ್ನು ಪ್ರಶ್ನಿಸಿದ ಮಾಲಿಕರ ಪರವಾಗಿ ಕೋರ್ಟ್‌ ತೀರ್ಪು ನೀಡಿತು. ಇದನ್ನೂ ಸಹಿಸದ ಇಂದಿರಾ, ಮತ್ತೊಂದು ತಿದ್ದುಪಡಿ(25ನೇ) ತಂದರು. ಇದರ ಜೊತೆಗೇ, ಭಾರತ ಒಕ್ಕೂಟದಲ್ಲಿವಿಲೀನಗೊಂಡ ರಾಜಮನೆತನಗಳಿಗೆ ರಾಯಧನ ನೀಡುತ್ತಿದ್ದ ಪದ್ಧತಿಯನ್ನು ಇಂದಿರಾ ನಿಲ್ಲಿಸಿದರು. ಇದನ್ನು ಪ್ರಶ್ನಿಸಿದ ರಾಜಕುಟುಂಬಸ್ಥರ ಪರವಾಗಿ ಕೊರ್ಟ್‌ ತೀರ್ಪು ಬಂದಾಗ, ಅದನ್ನೂ ಅನೂರ್ಜಿತಗೊಳಿಸಲು 26ನೇ ತಿದ್ದುಪಡಿ ತಂದರು.

ಗೋಕರ್ಣ ವಿದ್ಯಾಕ್ಷೇತ್ರವಾಗಿಯೂ ಗುರುತಿಸುವಂತಾಗಲಿ

​ಗೋಲಕ್‌ನಾಥ ಪ್ರಕರಣ

​ಗೋಲಕ್‌ನಾಥ ಪ್ರಕರಣ

1967ರಲ್ಲಿ ಪಂಜಾಬ್‌ನ ಗೋಲಕ್‌ನಾಥ್‌ ಹೆಸರಿನ ಇಬ್ಬರು ಸೋದರರು ತಮಗೆ ಆಸ್ತಿ ಹಕ್ಕಿನಲ್ಲಿಅನ್ಯಾಯವಾಗಿದೆ ಎಂದು ಕೋರ್ಟ್‌ ಮೆಟ್ಟಿಲೇರಿದರು. ಪ್ರಜೆಗಳು ಒಂದು ನಿರ್ದಿಷ್ಟ ಪ್ರಮಾಣದ ಆಸ್ತಿಗಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದುವಂತಿಲ್ಲ. ಸರಕಾರ ಬೇಕಿದ್ದರೆ ಅವರ ಭೂಮಿಯನ್ನು ಕಿತ್ತುಕೊಳ್ಳಬಹುದು ಎಂದು ಸರಕಾರ ಕಾಯಿದೆ ರೂಪಿಸಿತ್ತು. ಗೋಲಕನಾಥ್‌ ಸಹೋದರರು, ನ್ಯಾಯಬದ್ಧ ಆಸ್ತಿ ಹೊಂದುವಿಕೆ, ದುಡಿಮೆ, ಗಳಿಕೆ, ನಮ್ಮ ಮೂಲಭೂತ ಹಕ್ಕು, ಇದನ್ನು ಸರಕಾರ ಕಸಿದುಕೊಳ್ಳುವಂತಿಲ್ಲಎಂದು ಸುಪ್ರೀಂ ಕೋರ್ಟ್‌ನಲ್ಲಿವಾದಿಸಿದರು. ಸಹೋದರರ ವಾದವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ಇದನ್ನು ಕೇಶವಾನಂದ ಭಾರತೀ ಸ್ವಾಮೀಜಿ ತಮ್ಮ ಅರ್ಜಿಯಲ್ಲಿ ಪ್ರಸ್ತಾವಿಸಿದ್ದರು.

ಕೋವಿಡ್‌ ಭೀತಿಯ ನಡುವೆಯೂ ನಮ್ಮ ಮೆಟ್ರೋ ಸಂಚಾರ, ಮೊದಲ ದಿನದ ಪ್ರತಿಕ್ರಿಯೆ ಹೇಗಿದೆ

ಮೂಲ ಸ್ವರೂಪ: ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಹಕ್ಕನ್ನು ಸಂವಿಧಾನವೇ ಕೇಂದ್ರ ಸರಕಾರಕ್ಕೆ 368ನೇ ವಿಧಿಯಲ್ಲಿ ನೀಡಿದೆ. ಆದರೆ ಅದರ ಮೂಲಸ್ವರೂಪವನ್ನು ಬದಲಾಯಿಸುವಂತಿಲ್ಲ ಎಂಬುದು ತೀರ್ಪಿನ ಸಾರಾಂಶ. 'ಮೂಲ ಸ್ವರೂಪ' ಎಂದರೇನು ಎಂಬುದನ್ನು ತೀರ್ಪು ವಿಶದಪಡಿಸಲಿಲ್ಲ. ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ, ಪ್ರಜಾಪ್ರಭುತ್ವಗಳನ್ನು ಅದು ಹೆಸರಿಸಿತಷ್ಟೇ. ಆದರೆ ಅಲ್ಲಿಂದೀಚೆಗೆ ನೀಡಲಾದ ಅನೇಕ ತೀರ್ಪುಗಳಲ್ಲಿಈ ಮೂಲ ಸ್ವರೂಪವನ್ನು ವ್ಯಾಖ್ಯಾನಿಸಲಾಗುತ್ತಿದೆ.

ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾಕ್ಕೆ ಆಗ್ರಹ: ಸಂಕಷ್ಟದಲ್ಲಿರುವ ವ್ಯಾಪಾರಸ್ಥರಿಂದ ಪಾಲಿಕೆಗೆ ಮನವಿ!

​ತೀರ್ಪಿಗೆ ವಿಫಲ ಮರುಪರಿಶೀಲನೆ

​ತೀರ್ಪಿಗೆ ವಿಫಲ ಮರುಪರಿಶೀಲನೆ

ತೀರ್ಪು ಬಂದ ದಿನವೇ ಇಂದಿರಾ, ಪೀಠದಲ್ಲಿದ್ದ ಹಿರಿಯ ನ್ಯಾಯಾಧೀಶರನ್ನು ಕಡೆಗಣಿಸಿ, ಸರಕಾರದ ಪರ ಅಭಿಪ್ರಾಯ ಮಂಡಿಸಿದ್ದ ಎ.ಎನ್‌.ರೇ ಎಂಬವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದರು. ಅವರು, ಪ್ರಕರಣದ ತೀರ್ಪಿನ ಮರುಪರಿಶೀಲನೆಗೆ 13 ನ್ಯಾಯಾಧೀಶರ ಇನ್ನೊಂದು ಪೀಠ ನೇಮಿಸಿದರು. ಆದರೆ ಯಾರೂ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿರಲೇ ಇಲ್ಲ. ಟೀಕೆಗೆ ತುತ್ತಾದ ರೇ, ಎರಡೇ ದಿನದಲ್ಲಿಪೀಠವನ್ನು ವಿಸರ್ಜಿಸಿದರು.

ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಹೆಣ್ಮಕ್ಕಳು

ತೀರ್ಪಿನ ಅನೂರ್ಜಿತಕ್ಕೆ ಯತ್ನ: ಸುಪ್ರೀಂ ಕೋರ್ಟ್‌ ಈ ತೀರ್ಪನ್ನು ನೀಡಿದ ಬಳಿಕವೂ ಇಂದಿರಾ ಗಾಂಧಿ ಮತ್ತೂ ಅನೇಕ ತಿದ್ದುಪಡಿ, ತುರ್ತು ಪರಿಸ್ಥಿತಿ ಇತ್ಯಾದಿಗಳ ಮೂಲಕ ತಮ್ಮ ಅಧಿಕಾರವನ್ನು ಸಂವಿಧಾನಕ್ಕಿಂತಲೂ ಎತ್ತರಕ್ಕೆ ಒಯ್ಯಲು ಯತ್ನಿಸಿದರು. 39ನೇ ತಿದ್ದುಪಡಿ (ರಾಷ್ಟ್ರಪತಿ, ಪ್ರಧಾನಿಗಳ ಆಯ್ಕೆಯನ್ನು ಪ್ರಶ್ನಿಸುವಂತಿಲ್ಲ), 41ನೇ ತಿದ್ದುಪಡಿ (ರಾಷ್ಟ್ರಪತಿ, ಪ್ರಧಾನಿ ಮೇಲೆ ಕೇಸು ಹಾಕುವಂತಿಲ್ಲ) ತಂದರು. ಆದರೆ ಅವ್ಯಾವುದೂ ಕೇಶವಾನಂದ ಭಾರತೀ ಪ್ರಕರಣದ ತೀರ್ಪಿನ ಮುಂದೆ, ಊರ್ಜಿತವಾಗಿ ಉಳಿಯಲಿಲ್ಲ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ